ಬಾಗಿ ಬೇಡಿರೋ ಯತಿ ರಾಘವೇಂದ್ರರ

ಬಾಗಿ ಬೇಡಿರೋ ಯತಿ ರಾಘವೇಂದ್ರರ
ಯೋಗಿವರ್ಯರಾ ಭವದ ರೋಗಪರಿಹರ  ||ಪ||

ಭುವಿಯ ಬುಧರಿಗೆ ದಿವ್ಯ ಭವ್ಯಚರಿತೆಯ
ತವಕದಿಂದಲಿ ಬೆಳಗಿದವರ ಪಾಡಿರೋ||
ಕರೆದುಕಂಬದಿ ನರಹರಿಯತೋರ್ದರ
ಪರಮಭಕುತಿಯ ಧರಣಿಧರೆಗೆಸಾರ್ದರ  ||೧||

ಸೋಸಿನಿಂದಲ ಯತಿವ್ಯಾಸರಾದ
ರಾಶಿಗ್ರಂಥ ರಚಿಸಿ ಸಂತೋಷಬೀರ್ದರ||
ಗುರುಸುಧೀಂದ್ರರಾ ವರಕರಸುಜಾತರ
ಹರಿಯಪಾದವೆ ತಮ್ಮಸಿರಿಎಂದರಿತರ ||೨||

ತುಂಗತೀರದಿ ಮೆರೆವಮಂಗಳಾಂಗರ
ರಂಗನಂಘ್ರಿಯ ಅಂತರಂಗ ಭಜಕರ||
ಮೋದತೀರ್ಥರ ಮತವಸಾಧಿಸುವರ
ಸಾಧುವೃಂದಕೆ ಸದ್ಬೋಧೆಗೈವರ||೩||

ಇಂದು ನೋಡಿರೊ ಇವರ ಚಂದವೈಭವ
ಎಂದುಕಾಣದ ಆನಂದದನುಭವ||
ದೇಶ ದೇಶದ ಜನರು ದಾಸರಾಗುತ
ಸೂಸುಕರುಣದ ನಿಧಿಯ ರಾಶಿಕಂಡರು||೪||

ಮಾಡಬಾರದ ಕರ್ಮ ಮಾಡಿದವರು
ಬೇಡಿ ಬಾಗಿ ಕೊಂಡಾಡುತೀರ್ಪರು||
ಮದಡನಾದರು ಇವರ ಮುದದಿ ಬೇಡಲು
ಬುಧನು ಆಗುವ ಶುಭದ ಉದಯ ನೋಡುವ ||೫||

ಭಕ್ತಿಯಿಂದಲಿ ಮೂಲಮೃತ್ತಿಕಾಜಲ
ನಿತ್ಯಸೇವಿಪ ಜನಕೆ ಮುಕ್ತಿಯೇಫಲ||
ಭೂತಗಣಗಳು ಈ ಖ್ಯಾತಿಮಹಿಮರ
ಪಾದದೂದುಕೆ ನಡುಗಿ ಸೋತುಬೀಳ್ವರು||೬||

ರಾಘವೇಂದ್ರರ ನಾಮ ರೋಗ ಭಯಹರ
ಜಾಗುಮಾಡದೆ ಪೀಡೆ ನೀಗಿಕೊಳ್ಳಿರೋ||
ಪುತ್ರಕಾಮರೂ ಕರಗಳೆತ್ತಿ ಬೇಡಿರೋ
ಮತ್ತೆ ಫಲಗಳ ರಾಶಿ ಇತ್ತ ನೋಡಿರೋ||೭||

ಚರಣ ಕಮಲಕೆ ಎರಗಿ ಶಿರವಬಾಗುವ
ಶರಣ ಜನರಿಗೆ ಸುರತರುವು ಆಗುವ|| 
ಶುಭದಗುಣನಿಧಿ ಭುವಿಗೆ ಅಭಯವಾರಿಧಿ
ನಭದಮಣಿಸಮ ಪ್ರಭೆಯ ವಿಭವದೂಪಮಾ||೮||

ಕರುವು ಕರೆದರೆ ಬರುವ ತುರುವ ತೆರದಲಿ
ಶರಣರಿಗೆ ದೊರೆ ಮರುಗಿ ಬರುವ ಭರದಲಿ||
ಗಳಿಸಿ ತುಂಬಿದ ಪುಣ್ಯಫಲದ ರಾಶಿಯು
ಹೊಳೆಯುತಿರ್ಪುದು ಪಾಲ್ಜಲಧಿಯಂದದಿ||೮||

ಕರುಣಸಾಗರನೆಂಬ ಬಿರುದು ಧರೆಯೊಳು
ಮೆರೆಯುತಿಪ್ಪುದು ರವಿಯ ಕಿರಣದಂದದಿ||
ಯೊಗಿವರ್ಯ ಶ್ರೀ ರಾಘವೇಂದ್ರರ
ಭಾಗ್ಯಭೋಗಕೆ ಇಂದು ಯೋಗ್ಯರಾಗಿರೋ||೧೦||

ಅಪ್ಪಣಾರ್ಯರು ಇವರುಒಪ್ಪುವಂದದೀ
ಒಪ್ಪಿಸಿರುವರು ಕವನದಿರ್ಪಸ್ತುತಿಯನು||
ಗುರುಕಟಾಕ್ಷವ ಪಡೆದು ಸರಳಸ್ತೊತ್ರವ
ಪಿರಿಯರೆಲ್ಲರೂ ಪಠಿಸಿ ಹರುಷ ಪಡುವರು||೧೧||

ಮಣಿದುಬೇಡಿರೋ ಕುಣಿಕುಣಿದುಪಾಡಿರೋ
ಎಣಿಕೆಯಿಲ್ಲದ ವರಗಳೆಣಿಸಿಗಳಿಸಿರೊ||
ದೋಷದೂರ ಶ್ರೀ ರಾಘವೇಂದ್ರರ
ಈಶನೆಂಬರೂ ಸಂತೋಷಭರಿತರು|೧೨||

ಉದಯಕಾಲದಿ ಎದ್ದು ಸದಮಲಾತ್ಮರು
ಇದನು ಪಠಿಸಲು ದಿವ್ಯಪದವಿ ದೊರೆವುದು||
ನಿತ್ಯದಲ್ಲಿ ಈ ಸ್ತುತ್ಯಗೀತೆಯ
ಎತ್ತಿಪಾಡಲು ಸರ್ವಸಿದ್ಧಿನಿಶ್ಚಯ||೧೩||

ಮೋದದಿಂದಲಿ ಇದನ್ನು ಓದಿ ಪೇಳ್ದರೆ
ಸಾಧುಮಾರ್ಗ ಸದ್ಬೋಧೆ ದೊರೆವುದು||
ಘನ್ನಗುರುಗಳ ಪಾವನ್ನಸ್ಮರಣೆಯ
ಮುನ್ನಮಾಡಿರೊ ಪರಮಧನ್ಯರಾಗಿರೋ||೧೪||

ಆದಿದೇವ ಶ್ರೀಖಾದ್ರಿದೇವನ
ಪಾದದೂತನ ಧ್ಯಾನ ಮೋದಸಾಧನಾ||

Leave a Reply